ಅವತಾರಿ

ರಾಮಕೃಷ್ಣ ಪರಮಹಂಸರೆಂದರೆ ಋಷಿ
ಅವರನ್ನು ಅನುಭವಿಸಿದರೆ ಖುಷಿ
ಅವರ ಬಾಳೆ ಒಂದು ಪವಾಡ
ನಿತ್ಯ ಅವರನ್ನೆ ನೀನು ಪಾಡ

ಜಗನ್ಮಾತೆಯ ಸೇವೆಯಲ್ಲಿ ತಲ್ಲೀನರು
ಅವಳ ಮಹಿಮೆಗಳ ಅರಗಿಸಿಕೊಂಡವರು
ಅವಳೊಂದಿಗೆ ನಿಂತು ಮಾತನಾಡಿದವರು
ಅವಳ ಆಜ್ಞೆಯಂತೆ ಬಾಳು ಸವೆಸಿದವರು

ಸಾಕಾರ ನಿರಾಕಾರಗಳೆಲ್ಲ ರೂಢಿಸಿಕೊಂಡವರು
ನಿರ್ವಿಕಲ್ಪ ಸಮಾಧಿ ಪಡೆದುಕೊಂಡವರು
ಪೈಗಂಬರ್‌ ಯೇಸುರನ್ನು ತಾ ಧರಿಸಿದವರು
ಹಿಂದೂ ಧರ್ಮವೇ ಉದ್ಧಾರ ಮಾಡಿದವರು

ಧೀಮಂತ ಶಿಷ್ಯಕೋಟಿ ಸೃಷ್ಟಿಸಿದವರು
ಭಾವಗಳಿಂದ ಪರಿಪೂರ್ಣತೆ ದರ್ಶಿಸಿದವರು
ಧ್ಯಾನ ಸಮಾಧಿಗಳಿಂದ ಸಾಧಿಸಿದವರು
ಹಗಲಿರುಳು ದೇವರಲ್ಲಿ ಲೀನವಾದವರು

ಅವತಾರ ಮಹಾನ ಮೂರ್ತಿ ವೆತ್ತವರು
ಪತ್ನಿಯನ್ನೆ ದೇವಿಯಾಗಿ ಸ್ವೀಕರಿಸಿದವರು
ತನ್ನದೆಲ್ಲವೂ ವಿಶ್ವಕ್ಕೆ ಧಾರೆಯೆರೆದವರು
ಮನುಕುಲಕ್ಕೆ ಮಾಣಿಕ್ಯ ವಿಠಲರಾದರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಷ್ಟವಿಲ್ಲದಿದ್ದರುನೂ
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ೧೦ನೆಯ ಖಂಡ – ಉಪಹಾಸಗಳ ಉಪಯುಕ್ತತೆ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys